ಚಂಡೀಗಢ/ಚೆನ್ನೈ: ಬಾಬ್ರಿ ಮಸೀದಿ ಧ್ವಂಸ ಮಾಡಿದ್ದಕ್ಕಾಗಿ ಸಂಘ ಪರಿವಾರ ಪಶ್ಚಾತ್ತಾಪ ಪಡುವ ಪ್ರಶ್ನೆಯೇ ಇಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬ್ರಿ ಮಸೀದಿ ಧ್ವಂಸವಾಗಿದ್ದು ಯಾವುದೇ ಒಳ ಸಂಚಿನಿಂದಲ್ಲ, ಆ ಕ್ಷಣದಲ್ಲಿ ಕರಸೇವಕರು ಸ್ವಯಂಪ್ರೇರಿತವಾಗಿ ಮಾಡಿದ ಕೆಲಸ ಅದು. ಇದಕ್ಕಾಗಿ ಸಂಘ ಪರಿವಾರ ಪಶ್ಚಾತ್ತಾಪ ಪಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮಧ್ಯೆ, 1992 ರ ಬಾಬ್ರಿ ಮಸೀದಿ ಧ್ವಂಸ ಪೂರ್ವಯೋಜಿತವಲ್ಲ ಎಂದು ವಿಎಚ್ಪಿ ಮುಖ್ಯಸ್ಥ ಅಶೋಕ್ ಸಿಂಘಾಲ್ ಹೇಳಿದ್ದಾರೆ.
ಸೌಜನ್ಯ : ಕನ್ನಡಪ್ರಭ